ಕನ್ನಡ ಕಲಿಯಿರಿ. ನಿಮ್ಮ ಅನಿಸಿಕೆಯನ್ನು ಕನ್ನಡದಲ್ಲಿ ನೀಡಿರಿ.


Type in English. Press Space to get it in ಕನ್ನಡ ಲಿಪಿ Press Ctrl+g to toggle between English and Kannada

ಸೋಮವಾರ, ಅಕ್ಟೋಬರ್ 3, 2011

ಬಾಳಾಟ..


ಉದ್ದ ಗಾಳಕೆ ಹುಳವ ಸಿಕ್ಕಿಸಿ 
ಗದ್ದೆ ದಡದಲಿ ನಿಂತು,
ಕೆರೆಯಲೀಜುವ ಮೀನಾ ಹಿಡಿಯಲು
ಹೊಂಚು ಹಾಕುತ ಕುಳ್ಳಿರೆ
ಮರೆತೇ ಬಿಟ್ಟೆವು ಜೀವ ಅವುಗಳ
ಇಲ್ಲವೇ ಹಕ್ಕು ಬದುಕಲು??

ಮನೆಯ ಮುಂದಿಹ ಕೋಳಿ ಮರಿಗಳ
ಕೊಟ್ಟು ಅಕ್ಕಿಯ ಸಾಕಿದೆ.
ನೆಂಟರಿಷ್ಟರು ಬಂದು ಕೂಡಿರೆ
ಕೊಂದು ತಿಂದೆವು ಕೇಳದೆ.
ಮರೆತೇ ಬಿಟ್ಟೆವು ಜೀವ ಅವುಗಳ
ಇಲ್ಲವೇ ಹಕ್ಕು ಬದುಕಲು??

ಜಗದ ಜೀವವೇ ಅಷ್ಟೇ ಕಾಣಿರಿ.
ಹುಲಿಯು ಕೊಲ್ವದು ಜಿಂಕೆಯ 
ಇಲಿಯು ಸಾಯ್ವುದು ಬೆಕ್ಕಿಗೆ
ಮನುಜ ಸತ್ತವ ಆಹಾರವಾಗ್ವನು 
ಸೂಕ್ಷ್ಮ ಜೀವಿಯ ಬಾಯಿಗೆ
ಮತ್ತೆ ಮಣ್ಣಲಿ ಸೇರಿ ಕೊಡುವನು 
ಪೌಷ್ಟಿಕಾಮ್ಷತೆ ಗಿಡ ಮರ ಬೇರಿಗೆ.

ಜೀವ ಸರಪಣಿಯಲ್  ಅವನೇ ಬದುಕುವ
ಭಲಿಷ್ಟನೆನ್ನೋ ಪ್ರಾಣಿಯು.
ಇದು ದೇವನಾಟ, ಅಸ್ತಿತ್ವದಾಟ
ಜಗ ಜೀವದಾಟ, ಉಳಿವಿಗಾಗಿ ಹೋರಾಟ.

-ದಿಲೀಪ್ ಶೆಟ್ಟಿ.

(ಚಿತ್ರ ಕೃಪೆ: ಅಂತರ್ಜಾಲ)