
ಮೊಟ್ಟೆ ಹಾಕಿತು ಹೇಳದೆ,
ನೂಕಿ ಎಸೆದ ನಿನ್ನ ಬಿಂಬ
ಮತ್ತೆ ನೀಕುತಿದೆ ಕೇಳದೆ,
ಮೂಕ ಮನಸಿನ ಆರ್ತ ನಾದವು
ಮಾರ್ಗ ಮದ್ಯವೇ ಮರುಗಿದೆ.
ಮತ್ತೆ ಕಾಡುವ ಮಂದಿ
ಎದೆಯ ಗೋಡೆಯಲರಳಿ ಕಿಂಡಿ,
ತಪ್ಪಿ ಹೋಗಿದೆ ಕೊಂಡಿ,
ನೆನಪು ನೆಪವದು , ನಬದ ಮೀನು
ಹೋಗಲ್ ಹತ್ತಿರ ಹೊರಳುವುದೆತ್ತರ.
ಅಂತರದ ಆಂತರ್ಯ ರಾಜಿಯಾಗಲು ಒಪ್ಪಿ
ನೆನಪ ನೋವಿಗೆ ಬೀಗ ಮುದ್ರಿಸಿ
ಎದೆಯ ಅಂಗಳ ನುಣ್ಣನೊರಸಿ
ಕಾಯುತಿಹೆನು ಮತ್ತೆ ಬೇಟೆಗೆ
ಎದೆಯ ಬಗೆಯದೆ ಪ್ರೀತಿ ಹರಿಸುವವಳ
ಭೇಟಿಗೆ..
-ದಿಲೀಪ್ ಶೆಟ್ಟಿ
ಚಿತ್ರ ಕೃಪೆ : ಅಂತರ್ಜಾಲ
ಅಧ್ಬುತ. ಸುಂದರ ವಿರಹ ಚಿತ್ರಣ..
ಪ್ರತ್ಯುತ್ತರಅಳಿಸಿಇದೆ ಫಸ್ಟ್ ಟೈಮ್ ನ ನಿಮ್ ಬ್ಲಾಗನ್ನ ನೋಡ್ತಾ ಇರೋದು..ಯಾಕೋ ಮೊದಲ ಕವನಾನೆ ತುಂಬಾ ಹಿಡಿಸ್ತು..ಆದಷ್ಟು ಬೇಗ ಎಲ್ಲದನ್ನು ಓದ್ತೀನಿ..ಬರವಣಿಗೆ ಮುಂದುವರೆಸಿ..ಶುಭಾಶಯಗಳು :)
ಪ್ರತ್ಯುತ್ತರಅಳಿಸಿಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿವಿರಹದ ನೋವನ್ನ ಕವಿ ಮಾತ್ರವಲ್ಲ...ಕವಿತೆಯಲ್ಲಿ ಓದುಗನು ಆಸ್ವಾದಿಸುತ್ತಾನೆ ಎಂಬುದಕ್ಕೆ ಈ ಕವಿತೆಯೇ ಸಾಕ್ಷಿ...ತುಂಬಾ ಚೆನ್ನಾಗಿ ಬರೆದ್ದಿದಿರಿ..
ಪ್ರತ್ಯುತ್ತರಅಳಿಸಿಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿಸೂಪರ್ ದಿಲೀಪ್ .....!!!! ನಿಮ್ಮ ಕವನಗಳು ಮನ ಮುಟ್ಟಿ ಹೃದಯವನು ತಟ್ಟು ವುದು ........
ಪ್ರತ್ಯುತ್ತರಅಳಿಸಿ