ಪ್ರೀತಿ-ಪಚಿತಿ
ಮೊನ್ನೆ ಆಗಸಕ್ಕೆ ಹೋಗಿ
ಚುಕ್ಕಿ ಚಂದಿರನ ರಾಶಿ ತಂದು
ಬೆತ್ತ ಬಳ್ಳಿಯಲಿ ಕಟ್ಟಿ
ನನ್ನವಳ ಕೊರಳಿಗೆ ಹೊರಿಸಿದೆ.
ನಿನ್ನೆ ಸಾಗರಕ್ಕೆ ಮುಳುಗಿ
ಕಪ್ಪೆ ಚಿಪ್ಪಲಿ ಹುದುಗಿಹ
ಮುತ್ತ ಮೆತ್ತಗೆ ತಗೆದು
ಮತ್ತೆ ಮತ್ತಲಿ ಮೆತ್ತಿದೆ.
ಇಂದು 'ಕಾಲ'ವ ಕಟ್ಟಿ,
ಕಲರವವ ಮಾಡುತ
ಕೆಂಗುಲಾಬಿಯ ಹಿಡಿದು
ನನ್ನವಳ ಕೂಗಿದೆ.
'ನಲ್ಲಾ.., ನೀನೊಬ್ಬ ನಿದ್ದರೆ ಸನಿಹ,
ಚಂದ್ರ ಚುಕ್ಕಿಯೂ,ಮುತ್ತು ರತ್ನವೂ
ಸತ್ವ ಸತ್ತಿರೊ, ಸೊತ್ತವು'. ಅಂದವಳ
ಮೊಗದಲಿ ಮಂಧಹಾಸ ಮಂದವಾಗಿ,
ಕಣ್ಣ ಕಾವು ಕಾಲಿ ಕೈಯ ಹುಡುಕುತ,
ಕೆನ್ನೆ ಗುಳಿ ಸನ್ನೆ ಮಾಡುತ ನನ್ನೇ ಅಣುಕಿತು.
"ಬರಿಗೈ ದಾಸ, ಬೇಕಿತ್ತ ನನಗಿವನ
ಸಹವಾಸ"
ಓ ಸುಂದರಿ, ನಿನ್ನ ಮನವ ಬಲ್ಲವನಿಹನೇ
ಜಗದೊಳು??
-ದಿಲೀಪ್ ಶೆಟ್ಟಿ