ಕನ್ನಡ ಕಲಿಯಿರಿ. ನಿಮ್ಮ ಅನಿಸಿಕೆಯನ್ನು ಕನ್ನಡದಲ್ಲಿ ನೀಡಿರಿ.


Type in English. Press Space to get it in ಕನ್ನಡ ಲಿಪಿ Press Ctrl+g to toggle between English and Kannada

ಸೋಮವಾರ, ಡಿಸೆಂಬರ್ 30, 2013

ಹರ್ಕಟಿ ಚಡ್ಡಿಯ ಆ ದಿನಗಳು

(ಈ ಕಥೆಯಲ್ಲಿ ಬಂದಿರುವ ಎಲ್ಲ ಪಾತ್ರಗಳು ಕೇವಲ ಕಾಲ್ಪನಿಕ. ಮೃತ ಅಥವಾ ಜೀವಂತ ವ್ಯಕ್ತಿ, ಸಂಸ್ಥೆ ಯೊಂದಿಗೆ ಸಂಬಂಧ ಕಂಡುಬಂದಲ್ಲಿ ಅದು ಕಾಕತಾಳೀಯವಷ್ಟೇ. ಹಾಗೇನಾದರು ಸಂಬಂಧ ಇದ್ದೇ ಇದ್ದಲ್ಲಿ ಅದು ಈ ಸಮಾಜದ ದುರದೃಷ್ಟಕರ ಬೆಳವಣಿಗೆ ಮಾತ್ರ)

          ಬೇಸಿಗಿ ಬಿಸಿ ಬೋಳ್ ಮಂಡಿನ ಕವ್ಲಿ ಮಾಡ್ತೀತ್ತ್. ಕ್ವಜಿ ಹ್ವಂಡ, ಕೆರಿಯೆಲ್ಲ ಬತ್ತುಕ್ ಸುರುವಾಯ್ತ್. ನಮ್ಗು ಶಾಲೀಗ್ ರಜಿ ಸುರುವಯ್ತ್.  ಮೂರ್ ಓಡ್ ದ್ವಾಸಿ ತಿಂದ್ಕಂಡ್, ಹ್ವಾದ್ ವರ್ಷದ್ ಹರ್ದ್ ಹ್ವಾದ್ದ್ ಕಾಕಿ ಬಟ್ಟಿ ಚಡ್ಡಿ ಹಯ್ಕಂಡ್, ಗೈಡಿಮಕ್ಕಿ ಜಡ್ಡೆಗ್ ಬೆಳಿಗ್ಗಿಂದ ಸಾಯಂಕಾಲ್ದೊರಿಗ್ ಹ್ಯಡಿಮಂಡಿ ಬ್ಯಾಟ್, ರಬ್ಬರ್ ಬಾಲೆಗ್ ಬಾಜಲ್ ಬೆಟ್ಟ್ ಕಟ್ಕಂಡ್ ಆಡ್ತಿದ್ದ ಕಾಲ. ಆಗಳಿಕ್ ಕಿಸೆಗ್ ಎಂಟಣಿ ಇದ್ರು ರಾಜನ್ ಕಂಡೆಗ್ ಇದ್ದಿತ್. ಗುಡ್ಡಿ ಅಂಗಡಿ ಪಪ್ಸ್, ಬಾಜಲ್ ಕುಡಿಕ್ ಅಂಬಗ್ ಆರ್ಕುಡ್ಲೆ ಗ್ವಾಯಿ ಬೀಜ ಕಳುಕ್ ಹ್ವಾತಿದಿತ್.  ಈ Duty ಅಷ್ಟ್ ಸುಲ್ಬ ಅಲ್ಲ, ಕೆಲವ್ರ್ ಮರ್ದಿಂದ ಬಿದ್ದ್ ಸ್ವಂಟ ಮುರ್ಕಂಡ್ರೆ, ಕೆಲವ್ರ್ ಸಿಕ್ಕ ಬಿದ್ದ್ ಚವ್ಳಿ ಕ್ವಟ್ಟಿ ಪುಕ್ಳಿಗ್ ಬಿಟ್ಟ್ಕಂಡಿರ್. ಹಾಂಗಾಯಿ, ಎಷ್ಟೇ ಕಷ್ಟ ಇದ್ರೂ... “ಬಲ್ಲವನೇ ಬಲ್ಲ ಗ್ವಾಯಿ ಬೀಜದ rate”. ಇಷ್ಟಕ್ಕೆ ನಮ್ ರಜಿ ಮುಗಿಲಿಲ್ಲ. ಕ್ವಜಿ ಹ್ವಂಡದೆಗ್ ನೀರ್ ಕಡ್ಮಿ ಆರ್ ಕೂಡ್ಲೆ ನಾವ್ ಮೀನ್ ಹಿಡುಕ್ ready. ಮಾಬ್ಲಣ್ಣನ್ ತೂಂತ್ ಬಲಿ. (10 ಮೀನ್ ಬಲಿಗ್ ಬಂದ್ರ್ 9 ವರೆ ತಪ್ಪಸ್ಕ ಹ್ವಾತಿದಿತ್ ಅಂಥಾ ತೂಂತ್) ಅದನ್ನ ಕೆಂಬುಕೂ ನೂರಾರ್ ಸಲ ಅವ್ರ್ ಮನಿ ಕೋಳಿ ಹೇಲ್ ಮೆಟ್ಟಕ್. ಮಬ್ಲಣ್ಣ ಹಾಂಗ್ ಯಾರ್ಯಾರೋ ಹ್ವಾರ್ ಕೊಡುದಿಲ್ಲ, ಅವ್ರ್ ಪೈಕಿಯರ್, ಗನಾ ಪಣ್ಕ್ ಮಾಡ್ದಿದ್ದ್ ಮಕ್ಕಳಿಗ್ ಮಾತ್ರ ಬಲಿನ್ ಕೊಡುದ್. ಹಾಂಗೀನರನ್ನ್ ಹುಡ್ಕಿ ತೆಗ್ದ್, ಅವ್ರಿಗ್ ಒಂದಿನ ಮುಂಚೆನೆ ಗಾಳಿ ಹಾಕಿ, ಏರ್ಸಿ ready ಮಾಡ್ಕ್. ಇಷ್ಟೆಲ್ಲ ಮಾಡಿ, ಬಲಿ ತಕನ್ಡ್ ಬಂದ್ರ್ ಮೇಲೆ ಗ್ವಾಂಕ್ರ್ ಕ್ಯಪ್ಪಿ ಹ್ವಾಪು ಹಾಂಗೀದ್ದ್ ವಟ್ಟಿನ ಮುಚ್ಚು ಕೆಲ್ಸ ಮಾಡ್ಕ್. ನಮ್ಮಲ್ಲ್ ಕೆಲವ್ರ್ ಮೀನ್ ಹಿಡು ಕಲೆಗಾರಿಕೆಯಲ್ಲಿ ಪಳಗಿದ್ದವರು ಇದ್ದಿರ್. ನೀರ್ ಕಮ್ಮಿ ಇದ್ದ್ ಕ್ವಜಿ ಹ್ವಂಡದೆಗ್ ಕಾಲೆಗೆ ಶಿಲೊಪಿ (ಮೀನ್) ಹಿಡಿತಿದಿರ್. ನಾವ್ ರಾಶಿ ರಾಶಿ ಮೀನ್ ಹಿಡ್ಕಂಡ್ ಬರ್ಕ್ ಅಂದೇಳಿ ಏನ್ ಹ್ವಾಪುದಲ್ಲ ಬಿಡಿ. ಗೋನ್ಸ್ರಂಗೆ ಹೊಡ್ಕುಕ್ ಆಂದೆಳಿಯೇ ಹೊರ್ಡುದ್. ಮನೆಗ್ ಮೀನ್ ಹಿಡುಕ್ ಹ್ವಾತಿ ಅಂದ್ರೆ ಮದ್ಯಹ್ನ ಊಟಕ್ಕ್ ಒಂದ್ ಹ್ವದು ಆತ್ತಲ ಅಂದೇಳಿ ಬೈತಿರ್ಲಿಲ್ಲ ಅಷ್ಟೇ.

          ಹಾಂಗು ಹೀಂಗು ದೊಡ್ಡ್ ಕಾಂಪ್ರ್ ಅದ್ದ್ ಬಲಿನ ಬಾಳಿ ಬಳ್ಳೆಗ್ ಸುಮಾರಿಕ್ ಹೊಲ್ಕಂಡ್ ಒಂದ್ ತೂಂತ್ ಕ್ವಡ್ಪಾನ ಹಿಡ್ಕಂಡ್ 6-7 ಜನ ಗ್ಯದ್ದಿ ಬಯ್ಲೆಗ್ ನೆಡ್ಕಂಡ್ ಕ್ವಜಿ ಹ್ವಂಡದ್ ಬದಿಗ್ ಹೊರ್ಡ್ತ್. “ಹ್ವಾಪತಿಗ್ ನಾನ್ ಬಲಿ ಹಿಡ್ಕಂಬುದ್, ಆಚಿ ಕ್ವಜಿ ಹ್ವಾಂಡದಿಂದ ಈಚಿ ವರಿಗ್ ಸುಕೇತ ಬಲಿ(ಬಲೆ) ಹಿಡ್ಕಂಬುಡ್, ಕಡಿಕ್ ದ್ರುವ, ಪುಟ್ಟ, ಚಣ್ಣ್ ಪುಟ್ಟ..” ಹೀಂಗೆ ಪಾಲ್ ಹಂಚ್ಕಂತ್. ಅಂತೂ ಕ್ವಜಿ ಹ್ವಂಡ ತಲಪ್ತ್. ಬಲಿ ಬಿಡ್ಸಿ ಒಂದ್ ಗೂಟ ಪುಟ್ಟ ಹಿಡ್ಕಂಡ್ರೆ, ಇನ್ನೊಂದ್ ಗೂಂಟ ಸುಕೇತ ಹಿಡ್ದ. ಹಸ್ರಿ (ಅಸ್ರಿ- ಬಲಿ ತಳ) ಕೈ ಹಾಕುಕೆ ನಮ್ಮ ಹೆಸರಾಂತ ಹಸ್ರಿ expert ಅಜಿತ ನ ತಮ್ಮ ಅಶೋಕನ್ನ ಬಿಡ್ತ್. ನಾವ್ ಬದೆಗ್ ಮೀನ್ ಬೆರ್ಸುಕ್ ಶುರು ಮಾಡ್ತ್. ಆಚಿ ಬದಿಯಿಂದ ಈಚಿ ಬದಿಗ್ ಬಪ್ಪುದ್, ಮೀನ್ ಮಸ್ತ್ ಹೊಡ್ಕಾಡ್ರೆ ಮದ್ಯವೇ ಬಲಿ ಎತ್ತುವ ಅಂದೇಳಿ ಮಾತಾಡ್ಕಂಡ್ ಶುರು ಮಾಡ್ತ್. “ರವುತ್ರೆ, ಒಳ್ಳೆ ಮೀನ್ ಸಿಕ್ಲಿ..”. ಅಶೋಕ ನೀರೇಗ್ ಕನ್ತ್ಕಂಡ್ ಕೆಸ್ರ್ ಗೂಡಾ ಬಲಿನ ಕಾಲೆಗ್ ಯೆಳ್ಕಂಡ್ ಹ್ವಾತಿದ್ದ.. “ಎಬ್ಯಾ.. ಐರ್ ಮರೆ.. ಸಲ್ಪ್ ದೊಡ್ಡದ್ ಅಲ್ಲ.. ಕಾಲಿಗ್ ತಾಂಗ್ತ್ ಮರೆ ” ಅಂದ ಅಶೋಕ. “ನಿನ್ ಸಾವ್.. ಸಮ ಅಸ್ರಿ ಹಿಡಿ.. ಮೀನ್ ಎಲ್ಲ ನುಗಳ್ಕ ಹ್ವಾತೊ...” ಬೈದ ಸುಕೇತ. ನಾನ್ ಮೀನ್ ಬೆರ್ಸ್ಕಂಡ್ ಹ್ವಾಪುದ್ರೋಳ್ಗೆ ಕೆಸ್ರೆಗ್ ಹುಕ್ಕಂಡ್ ಮೇಲ್ಬಳಿ- ಕಂತ್ಬಳಿ. ಹಾಂಗು ಹೀಂಗು ಕಷ್ಟ ಪಟ್ಟ್ ಮೇಲ್ ಬಂದಿ. ಬಲಿಯೂ ಬೆಟ್ಟಿಗ್ ಬಂತ್. ಅಶೋಕ ರಾಶಿ ರಾಶಿ ಗೋಸ್ರ್(ಕೆಸ್ರ್) ಗೋರಿದ. ಎಲ್ಲ ಎಷ್ಟಪ ಮೀನ್ ಇತ್ತ್ ಕಾಂಬ ಅಂದೇಳಿ ಕಣ್ಣ್ ದೊಡ್ಡದ್ ಮಾಡ್ಕ ಕಾಂತಿದ್ರ್. ಪಾಂಡ ಒಟ್ಟಿ ಕೊಡ್ಪಾನ ತಕನ್ಡ್ ಓಡ್ ಬಂದ. ಮೂರ್ ಗ್ವಾಂಕ್ರ್ ಕ್ಯಪ್ಪಿ, ಒಂದ್ ಐರ್ ಮರಿ, ಒಳ್ಳಿ ಹಾವ್, 5-6 ಕೊಂತಿ ಕಾಣಿ, 2 ಅರೋಲಿ(ನಾವ್ ತಿಂದಿದ್ದ್) ಬಿಟ್ರೆ ಪುಟ್ಟ ಕಾಲೆಗ್ ಹಿಡದ್ದ್ ಶಿಲೋಪಿಯೇ ದೊಡ್ಡ ಮೀನ್. “ನೀ ಸಮ ಅಸ್ರಿ ಹಿಡಿಲ. “ನೀನ್ ಕೋಲ್ ವಾರಿ ಹಿಡ್ಕಂದಿದೆ..” “ಬಲಿ ಕ್ವಟ್ಟಿ ಮಾಡ್ಕಂಡ್ ಹೊಯಿರಿ...” “ಸಮ ಮೀನ್ ಬೆರ್ಸ್ಲಿಲ್ಲ..” ಒಬ್ರಿಗ್ ಒಬ್ರ್ ಬೈಕಂತೆ ಆಯ್ಕಂಡ್ರ್. ನಾವು ಶಾಂತವಾಗಿ ಒಂದ್ ಉಚ್ಚಿ ಹೊಯ್ತ್. ಕ್ವಜಿ ಹ್ವಂಡಕ್ಕೊಂದು ಕಿರು ಕಾಣಿಕೆ. “ದಿಲ್ಲ (ಅಂದ್ರೆ ನಾನ್).. ಬಾ ನೀನ್ ಬಲಿ ಕೋಲ್ ಹಿಡ್ಕೊ ನಾನ್ ಅಸ್ರಿ ಕೈ ಹಾಕ್ತಿ..” ಅಂದ ಪುಟ್ಟ. ನಾನ್ ಹೊಯಿ ಗೂಟ ಹಿಡ್ಕಂಡಿ. ಪುಟ್ಟ, ಅಶೋಕ ಇಬ್ರೂ ಅಸ್ರಿಗೆ ಕೈ ಹಾಕ್ರ್. ಇನ್ನೊಂದು ಸುತ್ತಿನ ತಿರುಗಾಟದ ನಂತರವೂ ಶೂನ್ಯ ಫಲಿತಾಂಶ. “ಈ ಹ್ವಂಡ ಸುಖ ಇಲ್ಲ, ಆಚಿಗ್ ಹ್ವಾಪ.. “ ಅನ್ನೋ ತೀರ್ಮಾನ ಪ್ರಕಟ ಆಯ್ತ್.

          ಬಲೆಗ್ ಹ್ವಂಡದ ಸಂಖೆ ಜಾಸ್ತಿ ಆಯ್ತ್. ಹ್ವಾ ಬಲಿ ಪಾಲ್ ಒಂದ್ ಕೊಡಿ ಮರೆ.. ಇಲ್ದಿರ್ next ಟೈಮ್ ಮಮ್ಮ ಬಲಿ ಕೊಡುದಿಲ್ಲ..” ಅಂದ ಪ್ರವೀಣ. “ಮೀನ್ ಸಿಕ್ರ್ ಮೇಲ್ ಅಲ್ದ ಪಾಲ್ ಹಾಕುದ್” ಅಂದೇಳಿ ಕೊಂಕ್ ಹಾಕ್ದ ಚಣ್ಣ್ ಪುಟ್ಟ. ನಾವ್ ಹ್ವಾಪತಿಗ್ 6 ಜನ ಇದ್ರೂ ಕಡಿಕ್ ಅವ್ರ್ ಇವ್ರ್ ಅಂದೇಳಿ 12 ಜನ ಅಯ್ತ್. ಅಂದ್ರೆ ಬಲಿ ಸೇರಿ 13 ಪಾಲ್ ಅಯ್ಕ್. ಕಡಿ ಪಕ್ಷ 13 ಮೀನಾದ್ರೂ ಸಿಕ್ಕಕಲ. ಇದು ನಮ್ಮ ಲೆಕ್ಕಾಚಾರ. ಎರಡನೇ ಕ್ವಜಿ ಹೊಂಡ ಆಯ್ತ್, ಬಟ್ಟಿ ಕೆರಿ ಮುಗೀತ್, ತೆಕ್ಕಟ್ಟಿ ಬೈಲ್ ಪುರೆಸ್ತ್. ಗಂಟಿ ಎರಡೂ ಕಾಲಿಗ್ ತಡು ಶುರುವಾಯ್ತ್. ಹೊಟ್ಟೆಗ್ ಗುಳ್-ಗುಳ್ ಅಂತಿತ್ತ್. ಬಲೆಗ್ ಇಡೀ ತಿಮಿಂಗಿಲ ನುಗಳ್ಕಂಡ್ ಹ್ವಾಪಂಗಿದ್ದ್ ತೂತ್ ಆಯ್ತ್. ಇನ್ನ್ ಎಂತ ಸಾವುದ್. ಮನಿ ಬದಿಗ್ ಹ್ವಾಪ ಅಂದೇಳಿ ಎಲ್ಲ ಡಿಸೈಡ್ ಮಾಡಿ, ನೀರ್ ಸ್ವಲ್ಪ ಜಾಸ್ತಿ ಇದ್ದದ್ ಕೆರಿಗ್ ಹೊಯಿ ಲೈಕ್ ಮಾಡಿ ಮಿಂದ್ಕಂಡ್, ಬಲಿ ತೊಳ್ದ್ ಬೆಟ್ಟಿಗ್ ಬಂದ್ ಮೀನ್ ಪಾಲ್ ಹಾಕುಕ್ ಶುರು ಮಾಡ್ತ್.  ಅಲ್ಲೇ ಬೈಲೆಗ್ ಗಂಟಿ ಮೇಸ್ತಿದ್ದ್ ಕರ್ಕು ಬಂದ್, “ಮೀನ್ ಹಿಡ್ದಿರ್ಯ ಮಕ್ಕಳೇ, ನಂಗ್ ಒಂದ್ ಎರ್ಡ್ ಕಾಣಿ ಕೊಡಿನಿ..” ಅಂದ್ ಹೇಳ್ತಾ ಓಡ್ ಬಂದಳ್. “ನಾವ್ ಹಿಡದ್ದೇ ಮೂರು ಮತ್ತೊಂದ್. ಆದ್ರೆಗ್ 13 ಪಾಲ್ ಬೇರೆ. ಅದ್ರೋಟ್ಟೀಗ್ ಇವ್ಳೋಬ್ಬಳ್..” ಬೈಕಂತ ಮೀನ್ ಪಾಲ್ ಹಾಕುಕ್ ಶುರು ಮಾಡ್ಡ ಪುಟ್ಟ. ಶಿಲೋಪಿ ಯೆಲ್ಲ ಒಂದ್ ಬದಿಗ್, ಮುಯಿಡ-ಶಿಂಗ ಇನ್ನೊಂದ್ ಬದಿ. ಐರ್,ಕೊಂತಿ,ಕಾಣಿ ಹೀಂಗೆ ಬೇರೆ ಬೇರೆ ಮಾಡಿ, ಕಡಿಕ್ ಒಂದೊಂದನ್ನೇ ಲೆಕ್ಕ ಹಾಕಿ ಎಲ್ಲ ಪಾಲಿಗು ಎಲ್ಲ ಮೀನ್ ಬಾಪ್ಪು ಹಾಂಗೆ ಹಾಕುಕ್ ಶುರು ಮಾಡ್ದ ಪುಟ್ಟ. ಎಲ್ಲರೂ ಯಾವ್ ಪಾಲಿಗ್ ದೊಡ್ಡ್ ಮೀನ್ ಇತ್ತ್ ಅದ್ರ ಹತ್ರ ಹೊಯಿ ನಿತ್ಕಂಬುಕ್ ಶುರು ಮಾಡ್ರ್. ಪಾಲ್ ಅಯ್ತ್, ಎಲ್ಲ ಜರಿ ಕೊಟ್ಟಿ ಹುಡ್ಕಂಡ್ ಬಂದ್ ಮೀನ್ ಹಯ್ಕಂಡ್ ಹೊರ್ಟ್. “ಬೋಳಿಮಕ್ಕಳೆ ಮೀನ್ ತಕನ್ಡ್ ಹೊಗ್ಲ್ ಹಯ್ಕಂಡ್ ಹ್ವಾತ್ರ್ಯಲ, ಬಲಿ ಯಾರ್ ಹಿಡ್ಕಂಬುದ್ ?” ಕೇಂಡ ಪುಟ್ಟ. ಪಾಂಡ, ಚಣ್ಣ ಪುಟ್ಟ, ದ್ರುವ ಎಲ್ಲ ಬಲಿನ ನಮ್ಮ್ ಹತ್ರನೆ ತಕನ್ಡ್ ಹೊಯಿ ಕೊಡುಕ್ ಹೆಳ್ತ್ರ್ ಅಂದೇಳಿ ಬೇಗೆ ಕಾಲ್ ಕಿತ್ತಿರ್. ಉಳದ್ದ್ ಅಶೋಕ. “ಎಲ್ಲ ಸಲ ನೀವ್ ಹೀಂಗೆ ಮಾಡ್ತ್ರೀ.. ನಾನ್ ಇನ್ನೊಂದ್ ಸಲ ಬತ್ತಿಲ್ಲ..” ಮರ್ಕುಕ್ ಶುರು ಮಾಡ್ದ ಅಶೋಕ. ಸಾಯ್ಲಿ ಅಂದೇಳಿ ಒಂದ್ ಬದಿ ಸುಕೇತ ಹಿಡ್ಕಂಡ.

          ಗೋನ್ಸ್ರ್ ಆದ್ದ್ ಬಟ್ಟೆಗ್ ಮನಿಗ್ ಬಂದಿ. ಮೀನ್ ಕಂಡ್ ದಡ್ಡಮ್ಮಂಗೇ (ಅಜ್ಜಿ) ಕುಷಿ ಅಯ್ತ್. ಅಮ್ಮಂಗೇ ಸಿಟ್ಟ್ ಬಂತ್. “ಆ ಬಟ್ಟಿನ ವಗುದಾರು ಹ್ಯಾಂಗೆ.. ದಿನ ಹೀಂಗೆ ಗೋನ್ಸ್ರ್ ಮಾಡ್ಕ ಬಂದ್ರೆ ಬಟ್ಟಿನ ನೀನೆ ವಕ್ಕೋ..” ಬೈಯ್ಯುಕ್ ಶುರು ಮಾಡ್ದಳ್ ಅಮ್ಮ. “ನೀ ಸುಮ್ನಯ್ಕೋ ಮರತಿ.. ಗಡಾ ಮೀಕಿದ್ರೆ ಮುಂಚೆ ಬೆಣ್ಗಲ್ ಹೆಕ್ಕಂಡ್ ಬಾ.. ಮಸಲಿ ready ಮಾಡಿದಿ. ಬೇಗ್ ಉಣ್ಲಕ್.” ಅಂದಳ್ ದಡ್ಡಮ್ಮ. ನಾನ್ ಓಡಿ ಹೊಯಿ ದರಿ ಬದೆಗ್ ಬೆಣ್ಗಲ್ ಹುಡ್ಕುಕ್ ಶುರು ಮಾಡ್ದಿ. ಕೆರೆ ಮೀನಿಗ್ ಬೆಣ್ಗಲ್ ಒಗ್ಗರಣೆ ಬಿದ್ರ್ ಇತ್ತಲ.. ಅದ್ರ್ taste, ಪರಿಮಳವೇ ಬೇರೆ. ಬಲ್ಲವನೇ ಬಲ್ಲ ಬೆಣ್ಗಲ್ ಬಣ್ಣ. ಹೀಗೆ ಒಂದ್ ಒಳ್ಳೆ ಬೇಸಿಗ್ ರಜಿನ ಯಾವತ್ತೂ waste ಮಾಡ್ದೆ ಗಮ್ಮತೆಗ್ ಕಳುವ ಆ ದಿನ ನೆನ್ಪ್ ಮಾಡ್ಕಂಡ್ರೆ ಕಣ್ಣೆಲ್ಲ ಚಂಡಿ ಆತ್ತ್. ಹರ್ಕಟಿ ಚಡ್ಡೆಗ್ ಇದ್ದ್ ಮಜ jeans ಪ್ಯಾಂಟೆಗ್ ಇಲ್ಲ ಬಿಡಿ. ಎಂತಂತ್ರಿ??

ನೆನಪಿನ ಮಾಲೆಗೆ ಇನ್ನೊಂದು ವರ್ಷ.. ಕನಸಿನ ಬಾಳ್ವೆಗೆ ಮುಂದಿನ ವರ್ಷ. ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಷಯಗಳು.

ರಚನೆ-ಪರಿಕಲ್ಪನೆ
ದಿಲೀಪ ಕುಮಾರ ಶೆಟ್ಟಿ, ಗುಳ್ಳಾಡಿ.


(ಚಿತ್ರ ಕೃಪೆ: ಅಂತರ್ಜಾಲ)

ಒಂದು ಎಣ್ಣೆ ಕಥನ

          ಅವತ್ತು ಶನಿವಾರ ಬೆಳಗ್ಗಿನ ಜಾವ 2:30. ಕರಿ-ಗತ್ತಲು. ಕತ್ತಲು ಕಪ್ಪಾಗೆ ಇರುತ್ತೆ ಬಿಡಿ!!!. ಆಗ black and white ನಾಯಿಯೊಂದು ಕಲರ್ ಕಲರ್ plastic cover ಕಚ್ಚುತ್ತಾ, ಬೆಂಗ್ಳೂರಲ್ಲಿ 30 x 40 ಸೈಟ್  ಇದ್ದವ್ರ ಹಾಗೆ ನಾನೇ ಯಜಮಾನ ಅನ್ನೋ ಅಹಂ ಅಲ್ಲಿ  ಬೀದಿ ಮದ್ಯೆ ಕೂತಿತ್ತು. ನಾನು ಮನೆಯಿಂದ bag ಹಿಡ್ಕೊಂಡು ಅದೇ ಮಾರ್ಗವಾಗಿ main road ಕಡೆ ಹೊರಟೆ. ಕರಿ ಮುಖದ ನಾಯಿ ಗೋದಿ ಮುಖದ ನನ್ನನ್ನ ಯಾಕೋ ವಿಚಿತ್ರವಾಗಿ ನೋಡೋಕ್ ಶುರು ಮಾಡ್ತು. (ಅದು ಕಚ್ಚತಾ ಇರೊ cover ನ ಕದಿಯೊಕ್ ಬಂದವರ ತರಹ). ನಮ್ಗೆ ಎದೆ ಒಳ್ಗೆ ಹೊಟ್ಟೆ ಕಿವುಚಿದ ಅನುಭವ. ಇಂತ time ನಲ್ಲಿ trip ಹೋಗೊದು ಬೇಕಿತ್ತಾ ಅಂದ್ಕೊಂಡೆ. ಇನ್ನೇನು ಅದು plastic cover ನ ಬಿಟ್ಟು ನನ್ನ ಮೇಲ್ ಧಾಳಿ ಮಾಡ್ಬೇಕು... ಕೀ.. ಕೀ.. i20 ಕಾರು ಅಲ್ಲಲ್ಲ M80 (ಕಿತ್ತೊಗಿರೋ) ಗಾಡಿಯಲ್ಲಿ ದಾಡಿ ಬಿಟ್ಟಿರೊ body ಒಂದು horn ಹಾಕ್ತಾ ಪಾಸ್ ಆಯ್ತು. ಅದ್ರ ಕರ್ಕಷ horn ಸೌಂಡಿಗೆ BBMP ನಾಯಿ ಹಿಡಿಯೋರ van ಅಂದ್ಕೊಂಡು ಎದ್ನೋ-ಬಿದ್ನೋ ಅನ್ನೋ ಹಾಗೆ ನಾಯಿ ಕಾಲು ಕಿತ್ತಿತು. ನಾನು ನಿದಾನವಾಗಿ BTM main road ಹತ್ರ ಬಂದು ನಿಂತೆ.


          ಈ ತಡ ರಾತ್ರಿ ( ಸ್ವಲ್ಪ ಬೇಗ ಹಗಲು) main ರೋಡಲ್ಲಿ ಎನ್ ಕಿತ್ತ್ ಗುಡ್ಡೆಹಾಕ್ತನೆ ಇವನು ಅಂತ ತಾವುಗಳು ಅಂದ್ಕೊಂಡ್ರ?. ನಾವುಗಳು ಒಂದು tripಗೆ ಹೊರಟು ನಿಂತಿರೋದು. ನಾವೇ ಗೈಡ್. ಯಾಕಂದ್ರೆ ಹೋಗ್ತೀರೋದು ನಮ್ಮೂರಿಗೆ. ಕಡಲ ತಡಿಯ ಕುಂದಾಪುರಕ್ಕೆ. ಹೋಗ್ತೀರೋರು 5 ಮಂದಿ. ನಾನು ಹಾಗೂ ನನ್ನ ಗೆಳೆಯ ಮತ್ತು ಅವನು ಹಾಗೂ ಅವನ ಗೆಳೆಯರು.  ಅಂದ್ರೆ ಹೋಗೊ 5 ಜನರಲ್ಲಿ ನನಗೆ ಗೊತ್ತಿರೋರು ನಾನು ಮತ್ತೆ ನನ್ನ ಗೆಳೆಯ. ಉಳಿದ 3 ಜನ ನನಗೆ ಅ-ಪರಿಚಯಸ್ತರು. ಎಲ್ಲ ನಾಲ್ಕು ಜನರು (ನನ್ನನ್ನ ಬಿಟ್ಟು) ಬಡಗು ದಿಕ್ಕಿನವರು. ಅಂದ್ರೆ northy ಗಳು. (ಸ್ವಲ್ಪ ನಾರ್ತ ಇದ್ರು). ದೆಹಲಿ, ಬನಾರಾಸ್, ಪಂಜಾಬ್ ನವರು. ಅವ್ರಿಗೊಂದು ಕರಾವಳಿಯ ಉಪ್ಪು ನೀರು ಕುಡಿಸೊ ಪ್ರೋಗ್ರಾಮ್ ನಮ್ಮದು. ಗುಯ್ಯಿ.. ಅಂತ fully altered Mitsubishi lancer ಕಾರ್ ಬಂದು ನನ್ನ ಹತ್ರ ಬಂದು ನಿಂತಿತು. ನನ್ನ ಗೆಳೆಯ ಅವರ ಗೆಳೆಯರನ್ನ ಪರಿಚಯ ಮಾಡ್ಸ್ದ. ಹಾಯಿ-ಭಾಯಿ ಗಳ ನಡುವೆ ಕಾರು ಹೊರಡ್ತು. ದೇವಸ್ತಾನದಲ್ಲಿ ಊದುಬತ್ತಿ ಪರಿಮಳ ಹೇಗೆ ಗಮ್ಮ್ ಅನ್ನತ್ತೋ ಹಾಗೆ ಸಿಗರೇಟಿನ ಪರಿಮಳ ಮೂಗಿನ ಇಕ್ಕೆಲಗಳಲ್ಲಿ ನುಸುಳುತ್ತಿತ್ತು. ಕಾರಿನ ಡಿಕ್ಕಿಯಲ್ಲಿ ನಾಲ್ಕು ಫುಲ್ bottle ವ್ಹಿಸ್ಕಿ. Drive ಮಾಡೊ ಗೆಳೆಯನಿಗೋಸ್ಕರನೇ ಅಂತ goa ವೈನು. ಚಿಪ್ಸ್, ಗೋಡಂಬಿ, ನಿಪ್ಪಟ್ಟು. ಪಕ್ಕಾ bachelors ಟ್ರಿಪ್. ಒಂದು ಟ್ರಿಪ್ ನ ಹೇಗೆ ಎಂಜಾಯ್ ಮಾಡ್ಬೇಕು ಅನ್ನೋದನ್ನ ಇವ್ರಿಂದ ಕಲಿಬೇಕು. ಪ್ರತಿಯೊಂದು ಗಳಿಗೆ ಯಾವುದೇ ಜಂಜಾಟವಿಲ್ಲದೆ, ನಾಳಿನ ಸೋಗಿಗೆ ತಲೆ ಕೆಡಿಸದೆ, ಹಣ ಅನ್ನೋ ಸತ್ತ ಮರದ ಕಾಗದದ ಹಾಳೆಗೆ ಬೆಲೆ ಕೊಡದೆ ಇಂದಿನ ಗಳಿಗೆಯನ್ನ ಮನಸ್ಸಾರೆ ಆಸ್ವಾದಿಸುವವರು ಉತ್ತರ ಭಾರತೀಯರು. ಒಮ್ಮೊಮ್ಮೆ ಇವರಿಗೆ ದುಡ್ಡಿನ ಬೆಲೆನೆ ಗೊತ್ತಿಲ್ಲ, ಬರೀ ಶೋಕಿ. ದುಂಡು ವೆಚ್ಚ. ಅಂತೆಲ್ಲ ಅಂದ್ಕೋಬಹುದು. ನಿಜ. ಅಲ್ಲಿನ ಸಂಸ್ಕೃತಿ. ಜೀವನ ವೈಶಿಷ್ಟ್ಯ ,ರೀತಿ ರಿವಾಜುಗಳೆ ಬೇರೆ. ನಮ್ಮವರಂತೆ ಯೋಚಿಸೋದಿಲ್ಲ. ನಾಳಿನ ಚಿಂತೆ ಇಲ್ಲ. ಬಂದಿದ್ದನ್ನ ಬಂದ ಹಾಗೆ ಅನುಭವಿಸೊ ಜನ. ಕನಸನ್ನ ನನಸು ಮಾಡ್ಕೊಳ್ಳೋ ಜನ. ದುಡ್ಡಿನ ಜೊತೆ ಕನಸಿನೊಂದಿಗೆ ರಾಜಿ ಮಾಡ್ಕೊಳ್ಳೋರಲ್ಲ. ಹಾಗಾಗಿ ಪ್ರವಾಸದ ಪ್ರತಿ ಗಳಿಗೆಯನ್ನು ಆನಂದಿಸೋರು. ಆನಂದ ಅನ್ನೋದು ವ್ಯಕ್ತಿಗತ. ಕೆಲವರಿಗೆ ಪ್ರೇಕ್ಷಣೀಯ ಸ್ಥಳ ಕುಷಿ ಕೊಡ್ಬಹುದು- ಇನ್ನೂ ಕೆಲವರಿಗೆ ಪ್ರಯಾಣವೇ ಕುಷಿ ಕೊಡುತ್ತೆ.

                            

          ಗಂಟೆ 3:45 ಬೆಳ್ಳಿಗ್ಗೆ .ತುಮಕೂರು ರಸ್ತೆಯ ಮೊದಲ ಟೋಲ್ ನ ನಂತರ ಚಹಾ ಕುಡಿಯೋಣ ಅಂತ ಗಾಡಿ ನಿಲ್ಲಿಸಿ ಅಲ್ಲೇ ಇದ್ದ ಗೂಡು ಅಂಗಡಿಯಲ್ಲಿ ಚಹಾ ಹೀರಿದೆವು. ಚಹಾ ಆದ್ಮೇಲೆ ಒಂದ್-ಒಂದ್ ಪೆಗ್ಗು ವಿಸ್ಕಿ ಗುಳುಂ ಸ್ವಾಹಾ.. ಪಂಜಾಬಿ ಬಲ್ಲೆ ಬಲ್ಲೆ ಇನ್ನೊಂದು ಪೆಗ್ಗು ವಿಸ್ಕಿ, ಟೀ ಜೊತೆಗೆನೇ ಎತ್ಬಿಟ್ಟ. (ವ್ಹಿಸ್ಕಿ ಆದ್ಮೇಲೆ ಟೀ. ಜೊತೆ ಜೊತೆಗೆ). ನಮ್ಮಲ್ಲೂ ಇಂತ ಪುಣ್ಯಾತ್ಮರೂ ಇದ್ದಾರೆ. ಆದ್ರೆ ಬೆಳಿಗ್ಗೆ 9 ಗಂಟೆ ಆಗೋ ವರೆಗೂ 2 ಬಾಟ್ಲಿ ವ್ಹಿಸ್ಕಿ ನ ಹಿಸ್ಕಿ-ಹಿಸ್ಕಿ ಕಾಲಿ ಮಾಡಿದ್ರು. ನಮ್ಗೆ ಇದು ಮೊದಲ ಅನುಭವ. ಮೊದ್ಲೇ ಸರಿಯಾಗಿ ಬಾಷೆ ಬರಲ್ಲ. “ವ್ಹಿಸ್ಕಿ.. ಇಸ್ಕಿ ಮಾ.. ಬೆಹೇನ್..” ಒಂದರ ಮೇಲೆ ಒಂದರಂತೆ ಸಂಸ್ಕೃತ, ಪಂಜಾಭಿ.. ಬೈಗುಳ. “ಇವ್ರ್ ಬೈತವ್ರೋ, ಹೋಗಳ್ತವ್ರೋ ಗೊತ್ತಾಗ್ತಿರ್ಲಿಲ್ಲ. ಹಾಗೂ ಹೀಗೂ ಮಾಡಿ ಕನ್ನಡದಲ್ಲಿ ಅಚ್ಚು ಕಟ್ಟಾಗಿ ಬಯ್ಯೋದನ್ನ ಹೆಳ್ಕೋಟ್ಟು ತೀರ್ಥಹಳ್ಳಿ ತಲುಪೋವಾಗ ತಂದಿದ್ದ ತೀರ್ಥಯೆಲ್ಲಾ ಕಾಲಿ. ಗಂಟೆ 11. ಹೊಟ್ಟೆ ಹಾಗೆ ಚುರ್ಗುಟ್ಟಿತ್ತು. ಅಲ್ಲೇ ಚಿಕ್ಕ ಹೋಟೆಲಿಗೆ ಹೊದ್ವಿ. “ಸಾರ್, ತಿಂಡಿ ಏನಿದೆ?” ಕೆಳ್ದೆ. “ಪೂರಿ, ಇಡ್ಲಿ, ಗೊಳಿಬಜೆ” ಅಂದ ಹೊಟೇಲ್ ಮಾಣಿ. “ಅಭೇ.. ಕ್ಯಾ..? ಗೋಳ್-ಭಾಜಿ. ಓ ಕ್ಯಾ ಹೋತಾ ಹೈ” ಅಂದ ದೆಲ್ಹಿವಾಲಾ. ನಾವು ನಮ್ಮ ಹರ್ಕು ಪುರ್ಕು ಹಿಂದಿಯಲ್ಲಿ “ಸಲ್ಪ ಸಮಾಧಾನ ಮಾಡ್ಕೊ, ಆರ್ಡರ್ ಮಾಡ್ತೀನಿ ನೀನೆ ನೋಡು” ಅಂತ ಹೇಳಿ ಆರ್ಡರ್ ಮಾಡಿದೆ. ಗೊಳಿಬಜೆ ಬಂತು. ಎಲ್ರೂ ತಿಂದ್ರು. ಇಷ್ಟ ಆಯ್ತು. ಇನ್ನೊಂದ್ 5 ಪ್ಲೇಟು ಒಳಗ್ ಹೋಯ್ತು. ನೀವೂ ತಿಂದ್ ನೋಡಿ ಚೆನ್ನಾಗಿರುತ್ತೆ ಗೊಳಿಬಜೆ. ಅಂದ ಹಾಗೆ ಬೆಂಗಳೂರಲ್ಲಿ ಗೊಳಿಬಜೆಗೆ ಮಂಗ್ಳೂರ್ ಬೋಂಡ/ಬಜ್ಜಿ ಅಂತ ಕರಿತಾರೆ. ಅಲ್ಲಿಂದ ಕಾಲ್ಕೀತ್ತು, ಟಾರ್ ಕಿತ್ತೊಗಿರೋ ಆಗುಂಬೆ ದಾರಿಯಿಂದ ಕುಂದಾಪುರಕ್ಕೆ ಪ್ರಯಾಣ ಮುಂದುವರೆಸಿದ್ವಿ. ಸುಮಾರು ಸಂಜೆ 3 ಗಂಟೆಗೆ ಕುಂದಾಪುರ ತಲುಪಿದ್ವಿ. ಸಂಜೆಗೆ ಪಡುಕೆರೆ ಬೀಚ್, ರಾತ್ರಿ ಕಿನಾರ, ಎಣ್ಣೆ, ಮೀನು,ನೀರ್ ದೋಸೆ, ಎಣ್ಣೆ ಎಣ್ಣೆ.. nonstop ಬೆಳಿಗ್ಗೆ 3 ಗಂಟೆವರೆಗೆ. ಮತ್ತೆ ಬೆಳಿಗ್ಗೆ 8 ಗಂಟೆಗೆ st. ಮೇರಿಸ್ ದ್ವೀಪಕ್ಕೆ ಸಿದ್ದ ವಾಗಿ ನಿಂತಿಂದ್ರು. ಯಾವ hangover ಇರ್ಲಿಲ್ಲ. ಎಷ್ಟ್ ಎಣ್ಣೆ ಹೊಡದ್ರೂ ಜಗ್ಗೋ ಜಾಯಮಾನ ಅವ್ರದ್ದಲ್ಲ.

          “ಭಾಯಿ.. ಕುಡಿ ಮಸ್ತ್ ಲಗ್ತಿ ಹೈ..”. ಹಾಗ್ ನೋಡಿದ್ರೆ ನಿಮ್ಗೆ ಇವ್ರು ನಾರ್ತಿಸ್ ಹುಡುಗ್ರು ಅಂತ ಬಾಹ್ಯವಾಗಿ ಗುರುತಿಸೊಕ್ ಆಗೋಲ್ಲ. ನಾವು ಅವ್ರು ಒಂದೇ ರೀತಿಲಿ ಇರ್ತೀವಿ. “ಗುರು, ಅವ್ಳು ನೋಡೋ ಸಕ್ಕತ್ತಾಗವ್ಳೆ” ಅನ್ನೋದನ್ನ ಅವ್ರು ಹಿಂದಿಯಲ್ಲಿ ಹೇಳ್ತಾರೆ ಅಷ್ಟೇ. Men will be men.  ಆದ್ರೆ ಇವ್ರೂ ಉತ್ತರ ಭಾರತದ ಹುಡ್ಗಿರು ಅಂತ ಸಂತೆಲೂ ಪತ್ತೆ ಹಚ್ಚಬಹುದು. ಅವರ ಬಳುಕೊ ಸೊಂಟ, ಮಿನಿ ಸ್ಕರ್ಟ್, ಕಾಲಿ ಹಾಳೆಯಂತ ತೊಡೆ, ಯಾರಿಗೂ care ಮಾಡದೆ ಇರೊ attitude. ಸೂರ್ಯ ಮುಳುಗಿ ಹೊದ್ರೂ ಹಾಕಿರೋ sun-glass. ಹೀಗೆ.. ಒಂದಿಲ್ಲೊಂದು ರೀತಿಯಲ್ಲಿ ದಕ್ಷಿಣ ಭಾರತದ ಹುಡುಗಿಯರಿಗಿಂತ ಬಿನ್ನ-ವಿಬಿನ್ನ. ಈಗೀಗ ನಮ್ಮ ಹೆಂಗಳೆಯರೂ ಅವರಂತೆ ಹವಾ-ಭಾವ ಮೈ ಮಾಟವನ್ನ ಪ್ರದರ್ಶಿಸಿದರೂ ಸಹ ಅವರಂತೆ ಅಷ್ಟೊಂದು bold ಆಗಿರೊ attitude ಪಡಿಯೋಕೆ ಆಗೋಲ್ಲ. ಭಯ-ಭಕ್ತಿ, ಆಚಾರ-ವಿಚಾರ ಇನ್ನೂ ಇದೆ. ಅಂತೂ ಒಂದು ಸಣ್ಣ ಪ್ರವಾಸ ತೀರ್ಥ ದಿಂದ ಶುರುವಾಗಿ ತೀರ್ಥದೊಂದಿಗೆ ಮುಗಿತ ಬಂತು. ಇವರು ಮಾಡಿದ್ದು ಇಷ್ಟೇ, ಬೀಚೆಲ್ಲ ಸುತ್ತಾಡಿ, ಮುಳುಗಾಡಿ, ಎಂಜಾಯ್ ಮಾಡಿ ಹೋಗೊ ಮುನ್ನ ಮತ್ತೊಮ್ಮೆ ಮರವಂತೆ ಬೀಚ್ ನ ರಮಣೀಯ ದೃಶ್ಯವನ್ನ ಕ್ಯಾಮರಾ ದಲ್ಲಿ ಸೆರೆ ಹಿಡಿಯುತ್ತಾ, ದಾರಿಯುದ್ದಕ್ಕೂ ಗಾಡಿಗೂ, ಬಾಡಿಗೂ ಎಣ್ಣೆ ಹಾಕುತ್ತಾ ಒಂದು ಸಂತೃಪ್ತಿಯ ಕುಷಿಯಿಂದ ಬೆಂಗಳೂರಿನತ್ತ ಪಯಣ ಬೆಳೆಸಿದರು.

-ದಿಲೀಪ್ ಕುಮಾರ್ ಶೆಟ್ಟಿ.

ಚಿತ್ರಕೃಪೆ:ಅಂತರ್ಜಾಲ