ಕನ್ನಡ ಕಲಿಯಿರಿ. ನಿಮ್ಮ ಅನಿಸಿಕೆಯನ್ನು ಕನ್ನಡದಲ್ಲಿ ನೀಡಿರಿ.


Type in English. Press Space to get it in ಕನ್ನಡ ಲಿಪಿ Press Ctrl+g to toggle between English and Kannada

ಮಂಗಳವಾರ, ಫೆಬ್ರವರಿ 7, 2012

ಎಲ್ಲೆ ಮೀರಿ..


ಹೆಬ್ಬುಲಿಯ ಅಬ್ಬರದಿ 
ಹೆಬ್ಬಂಡೆಯ ಏರಿ,
ಹಬ್ಬಿದ ಅಹಂಕಾರದ ಅಹಂ 
ಕಳಚಿ ಹಾಕಿ,
ಬೆತ್ತಲೆಯ ಬಾನೊಳಗೆ 
ಬಚ್ಚಿಟ್ಟು,
ಚಿತ್ತ ಚಂಚಲೆಗೆ  ಕಸಿ ಕೊಟ್ಟು, 
ಅತಿಮಾನುಷದರ್ಶನದಿಂದೆದ್ದು 
ಸತ್ವ ಸೊರಗಿದ ಸೊಕ್ಕಿನ ಹಿರಿ ಕಿಂಡಿಗಳ 
ಪೊರೆ ಮುಚ್ಚಿ ,
ಮತ್ತೆ ಉಜ್ಜಿವಿಸಿ, ಉಜ್ವಲಿಸುವಾಸೆ.
ಅಭಿಭವದ ತೊಳಲಾಟಕ್ಕೆ 
ಭಕ್ತಿ ಭ್ರುಮರವ ಹುಡುಕಿ
ಸಂತೃಪ್ತಿಯ ಮಧು ಹೀರುವ ಆಸೆ.

         -ದಿಲೀಪ್ ಶೆಟ್ಟಿ

ಚಿತ್ರ ಕೃಪೆ: ಅಂತರ್ಜಾಲ