ಕನ್ನಡ ಕಲಿಯಿರಿ. ನಿಮ್ಮ ಅನಿಸಿಕೆಯನ್ನು ಕನ್ನಡದಲ್ಲಿ ನೀಡಿರಿ.


Type in English. Press Space to get it in ಕನ್ನಡ ಲಿಪಿ Press Ctrl+g to toggle between English and Kannada

ಭಾನುವಾರ, ನವೆಂಬರ್ 2, 2014

ನೀ ಸುಳಿದಾಗ...



ನೀ ಸುಳಿದಾಗ ನುಸುಳಿದ ಗಾಳಿ
ನನ್ನೆದೆಯ ಕಟ್ಟಿ ಹಾಕಿ,
ಏದುಸಿರಿನ ಅನುಕಂಪ
ಬಿಡದೆ ಬಡಿತವ ಕಾಡಿ,
ನಿನ್ನ ಮೆರವಣಿಗೆಗೆ ಹೊರಟಿದೆ.
ಒಮ್ಮೆ ತಾಕಿಸು, ನಿನ್ನ ನೀಳ ಕೇಶದ ಗಂಧ

ನನ್ನುಸಿರಲದ್ದಿ ಹಿಡಿವೆ, ಬಿಡದೆ ಹೊರಗಿನ್ನೆಂದೂ... 

-ದಿಲೀಪ್ ಶೆಟ್ಟಿ.

ಭಾನುವಾರ, ಸೆಪ್ಟೆಂಬರ್ 28, 2014

ಸ್ವಾಣಿ ಆರತಿ


         ಅದ್ ಸ್ವಾಣಿ ತಿಂಗಳ್ ಕಾಲ. ಕೆರೆ ತುಂಬಾ ನೀರ್ ತುಂಬ್ಕಂಡ್, ಗದ್ದೆ ಅಂಚಿನ ತುಂಬಾ ಲಾಯಿಕ್ ಹುಲ್ಲ್ ಬೆಳು ಕಾಲ. ಅಲ್ಲಲ್ಲ್ ಸ್ವಲ್ಪ ಸ್ವಲ್ಪ ಸ್ವಾಣಿ ಹೂಗ್ ಮಂಡಿ ಎತ್ತುಕ್ ಶುರು ಆಯಿತ್. ನಾವು ದಿನ ನಿತ್ಯದಂಗೆ ನಿತ್ಯಣ್ಣನ್ ಗೆದ್ದಿ ದಾಂಟ್ಕ೦ಡ್ ಸಾವಂತ್ರ್ ಮನಿ,ಕಟ್ಟಿತನ ಸುತ್ತ್ ಹಯ್ಕಂಡ್ ಹಾಂಗೂ- ಹೀಂಗೂ ಚಡ್ಡಿ ಗೋನ್ರ್ ಮಾಡ್ಕೊಳ್ಳದೆ ಶ್ರೀ ಮಹಾಲಿಂಗೇಶ್ವರ ಹಿರಿಯ ಪ್ರಾಥಮಿಕ ಶಾಲೆಗೆ ಸಸೂತ್ರವಾಗಿ time ಸರಿಯಾಯಿ ಬಂದ್ ತಲುಪ್ತ್. ಪ್ರಾರ್ಥನೆ ಆದ್ಮೆಲೆ ಶ್ರೀಧರ್ ಮಾಷ್ಟ್ರ್ ಒಂದ್ ಗಂಡಿನ್ ಹತ್ರ ನೋಟಿಸ್ ಕಳ್ಸಿ ಕೊಟ್ರ್. ನಮ್ಮ್ class ಮಾಷ್ಟ್ರ್ ಅದನ್ನ ಓದಿ ಹೇಳುಕ್ ಶುರು ಮಾಡ್ರ್  “ ಇದೆ ಬರುವ ಶುಕ್ರವಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸೋಣೆ ಆರತಿಯನ್ನು ಹಮ್ಮಿ ಕೊಂಡಿದ್ದು ....” ಆಮೇಲೆ ಏನೋನೊ ಹೇಳ್ತಿದ್ರ್, ನನ್ ಕೆಮಿಗ್ ಅದ್ ಕೆಂತಿರ್ಲಿಲ್ಲ. ನನ್ನ್ ಮನಸ್ಸು ಬೇರೇನೆ ಹೇಳ್ತೀತ್ತ್. “ಇದೆ ಬರುವ ಶುಕ್ರವಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸೋಣೆ ಆರತಿಯನ್ನು ಹಮ್ಮಿ ಕೊಂಡಿದ್ದು, ಒಳ್ಳೆ ಗಟ್ಟಿ ಇರೊ ಜರಿ ಕೊಟ್ಟೆ ತಗೊಂಡು ಬರಬೇಕಾಗಿ ವಿನಂತಿ. ತಪ್ಪಿದಲ್ಲಿ ಹೊದಳ್ ಪಂಚಕಜ್ಜಾಯ ಕೊಡುವುದಿಲ್ಲ..” ಅಂತಿತ್ತ್ ನನ್ನ ಮನ್ಸ್.
 Inline image 3

        ಪ್ರತಿ ವರ್ಷ ಶಾಲಿ ಪರವಾಗಿ ಮಾಷ್ಟ್ರು, ಮಕ್ಕಳು ಎಲ್ಲ ದುಡ್ಡ್ ಒಟ್ಟಾಕಿ ಉಳ್ತೂರ್ ದೇವಸ್ಥಾನದಲ್ಲಿ ಒಂದ್ ಪೂಜಾ ಕೊಡುದ್ ವಾಡಿಕಿ. ಉಳ್ತೂರ್ ಮಕ್ಕಳಿಗೆ ಸೋಣೆ ಆರತಿ ಹೊಸದೆನಲ್ಲಾ. ಸ್ವಾಣಿ ತಿಂಗಳ್ ತುಂಬಾ ನಡೀತಾ ಇರತ್ತ್. ದಿನ ಹೊಯಿಲಕ್. ಆದ್ರೆ ನಮ್ಗೆ,ಗುಳ್ಳಾಡಿಯರಿಗೆ ಅದ್ ಒಂಥರಾ ಹಬ್ಬ ಇದ್ದಂಗೆ. (ಈಗೀಗ ನಮ್ಮೂರಲ್ಲೂ ಸ್ವಾಣಿ ಆರತಿ ಮಾಡ್ತ್ರ್ ಅಂದ್ ಮಾಡ್ವ). ಆ ಹೊದಳ್ tasteಎ ಬೇರೆ. “ಬೋದಳ ನೂ ಬಲ್ಲ ಹೊದಳ್ ಬೆಲ್ಲ” ಅಂದಂಗೆ. Next ದಿನ ಶಾಲೆಗ್ ದುಡ್ಡ್ ಒಟ್ಟ್ ಹಾಕುಕ್ ಶುರು ಮಾಡ್ರ್. ಎಲ್ಲರಿಗೂ 50 ಪೈಸೆಯೊ ಒಂದ್ ರೂಪಾಯಿನೊ ತಪ್ಪುಕ್ ಹೇಳಿರ್ (ಗನ ಜರಿಕೊಟ್ಟಿ ಜೊತೆಗೆ). ಶಾಲಿ ಹಣಕಾಸು ಮಂತ್ರಿ ಗಳು ಕಂಪಾಸ್ ಬಾಕ್ಸ್ ಹಿಡ್ಕೊಂಡು ಕ್ಲಾಸಿಂದ ಕ್ಲಾಸಿಗೆ ಅಲುಕ್ ಶುರು ಮಾಡ್ದ. ನಮಗ್ ಕುಷಿಯೊ ಕುಷಿ. ಶುಕ್ರವಾರ ಯಾರ್ ಯಾರ್ ಕ್ಲಾಸ್ ಇತ್ತ್ ಅಂದಳಿ ಒಂದ್ ಕಣ್ಣ್ ಹಾಕ್ತ್. ಒಹೋ.. ಎಲ್ಲರದ್ದು ಕ್ಲಾಸ್ ತಪ್ಪಿಹೋತ್ತ್. ಗುರುವಾರ ಸಾಯಂಕಾಲ home-work ಮಾಡ್ಕರಿಲ್ಲ. ಗುಡ್ಡೆಗ್ ಲಯಿಕ್ ಮಾಡಿ ಹೊಡ್ಕ್ಲಕ್. ಅಷ್ಟಲ್ಲದೆ ಹೂ ಕೊಯ್ಕಂಡ್ ಹ್ವಾಪುಕೆ, ಅದಕ್ಕೆ ಇದಕ್ಕೆ ಅಂದೆಳಿ class ಬಿಟ್ಟ್ ಊರ್ ತಿರ್ಗುಕ್ ಹೊಯಿಲಕ್. ಒಂದ್ ಸ್ವಾಣಿ ಆರತಿಯೆಗೆ ಎಷ್ಟೆಲ್ಲ ಉಪಯೋಗ ಇತ್ತ್ ಕಾಣಿ. ಯಾಕಾರು ದಿನಾ ಸ್ವಾಣಿ ಆರತಿ ಬತ್ತಿಲ್ಲ ಅಂದಳಿ ಬೆಡ್ಕಂಡದ್ದು ಇತ್ತ್.
 Inline image 4

   ಅಂತೂ ಇಂತು ಆ ಶುಕ್ರವಾರ ಬಂದೆ ಬಿಡ್ತ್. ನಾನ್ ಚಂದ್ರಣ್ಣನ್ ಅಂಗಡಿಗ್ ಹೊಯಿ ಒಂದ್ ಒಳ್ಳೆ ನಾಲ್ಕಾಣಿ ಜರಿ ಕ್ವಟ್ಟಿ ತಕನ್ದ್ ಬಂದಿದಿ. ಅದೂ ಕಮ್ಮಿ ಆದ್ರೆ ಒಂದ್ ಕಾಲಿ ಟಾಮ್ ಹಾಳಿನೂ ಮುದ್ದಿ ಮಾಡಿ ಕಿಶೆಗ್ ಇಟ್ಕಂಡಿದ್ದಿ. ಎಲ್ಲ ವಿಧ್ಯಾರ್ಥಿಗಳೂ ಸಾಲಾಗಿ ದೇವಸ್ಥಾನದ ಬದಿಗ್ ಹೊಯಿಟ್ರ್. ದೇವಸ್ಥಾನದ ಜಗಲಿ ತುಂಬಾ ಮಕ್ಕಳ್ ಕುಕಂಬುಕ್ ಶುರು ಮಾಡ್ರ್. ನಾನು, ಅಮಿತ, ಪ್ರವೀಣ,ಸುಶಾಂತ ಒಂದ್ ಬದಿ ಮೂಲಿ ಹಿಡ್ಕಂಡ್  ಕೂಕಂತ್. ಬಟ್ರ್ ಮಂತ್ರಕ್ಕಿಂತ ಮಕ್ಕಳ್ ಗೌಜೆ ಜಾಸ್ತಿ ಆಯ್ತ್. ಚಂದ್ರ್ ಮಾಷ್ಟ್ರ್ ಒಂದ್ look ಕೊಟ್ರ್ ಕಾಣಿ,“ಗಪ್ಪ್ ಚುಪ್ ಬಾಯಿ ಮುಚ್”. ಸುಶಾಂತ ಬಪ್ಪತಿಗೆ ನಾಲ್ಕಾಣಿ ರಸ್ಗುಲ್ಲ ಹಿಡ್ಕಂಡ್ ಬಂದಿದ್ದಎಲ್ಲರೂ ಒಂದ್ ಒಂದೇ ಯಾರಿಗೂ ಗೊತ್ತಯ್ದೆ ಇಪ್ಪುವಂಗೆ ಬಾಯಿಗ್ ಹಯ್ಕಂಬು ಶುರು ಮಾಡ್ತ್. ಪೂಜವೂ ಶುರು ಆಯ್ತ್. ಬಟ್ರ್ ದೊಡ್ಡ ದೊಡ್ಡ ಆರತಿ, ಕಾಲ್ದೀಪಕ್ಕೆ ಬತ್ತಿ ಹಾಕಿ readyಮಾಡುಕ್ ಶುರು ಮಾಡ್ರ್. ಎಲ್ಲ ಗಂಟಿ ಬಡುಕ್ ಶುರು ಮಾಡ್ರ್. ವಾಧ್ಯಗೋಷ, ಮಂತ್ರ, ಮಂಗಳಾರತಿಗಳು ಸೀದಾ ಕೈಲಾಸಕ್ಕೆ ಕೇಳುವಷ್ಟು ಜಾಸ್ತಿ ಆಯ್ತ್. ಮಹಾ ಮಂಗಳಾರತಿ, ನೈವೇದ್ಯ ಎಲ್ಲ ಮುಗೀತ್. ಎಲ್ಲರೂ ಅಲ್ಲೇ ಅಡ್ಡ್ ಬಿದ್ದ್ ದೇವ್ರಿಗೆ ಕೈ ಮುಗುಕ್ ಶುರು ಮಾಡ್ರ್. ನಾನು ಬಕ್ತಿಯಿಂದ ಅಲ್ಲೇ ಮಂಡಿ ಊರಿ ಬೆಡ್ಕಂಡಿ. ಮಂಡಿ ಮೇಲ್ ಎತ್ತುದ್ರೊಳ್ಗೆ ಆಚಿ-ಈಚಿ ಜಾಗ ಕಾಲಿ. ಎಲ್ಲ ಪಂಚಕಜ್ಜಾಯಿಗ್line ನಿಲ್ಲುಕ್ ಶುರು ಮಾಡಿರ್.
 Inline image 5

ನಾನ್, ನಾನೇ ಬುದ್ದಿವಂತ. ನಾಲ್ಕಾಣಿ ಕೊಟ್ಟ್ ಜರಿ ಕ್ವಟ್ಟಿ ತಂದಿದಿ ಅಂದಳಿ ಮಾಡದ್ದ್. ಈಗ ಕಂಡ್ರೆ ಒಬ್ಬೊಬ್ಬ್ರತ್ರ ಕೈ-ಚೀಲದ್ ಅಷ್ಟ್ ದೊಡ್ಡ್ ಜರಿ ಕ್ವಟ್ಟಿ ಇತ್ತ್. ಹಾಳಾಯ್ ಹೊಯಿಲಿ ಅಂದೆಳಿ ನಾನು ಲೈನಿಗ್ ನಿತ್ಕಂಡಿ. ಜಯಲಕ್ಷ್ಮಿ ಮೇಡಂ ಎರಡ್ ಲೈನ್ ಮಾಡುಕ್ ಹೆಳ್ರ್. ಈಗ decision time.  ಒಂದು ತಪ್ಪು ನಿರ್ದಾರ ನಮ್ಮ ಜರಿ ಕ್ವಟ್ಟಿಗೆ ಏನೂ ಸಿಗದೆ ಇರೊ ಹಾಗೆ ಮಾಡುತ್ತೆ. ಆದೇನಪ್ಪ ಅಂದ್ರೆ ಎರಡು lineನಲ್ಲಿ ಯಾವ line ನಲ್ಲಿ ನಿಲ್ಲುದ್ ? ಅಂದೆಳಿ. ಯಾಕೆ ಅಂದ್ರೆ ಒಂದ್ lineನಲ್ಲಿ ಹೊದಳ್ ಹಂಚ್ತಿದ್ದದ್ದ್   ಅನಂತ್ ಮಾಷ್ಟ್ರ್. ಇನ್ನೊಂದ್lineನಲ್ಲ್ ಜಗ್ನಾತ್ ಮಾಷ್ಟ್ರ್. ಅನಂತ್ ಮಾಷ್ಟ್ರ್ ಕೈ ಸಣ್ಣದ್, ಜಗ್ನಾತ್ ಮಾಷ್ಟ್ರ್ ಕೈ ದೊಡ್ಡದ್. (ಆವಾಗವಾಗ ಬಡ್ಗಿ ತಿಂದ್ರೆ ಇದೆಲ್ಲ ಗೊತ್ತಾತ್ತ್) ಹಾಂಗಾಯಿ ಅನಂತ್ ಮಾಷ್ಟ್ರ್ ಎಷ್ಟೇ ದೊಡ್ಡ ಮುಷ್ಟಿ ಕಟ್ರೂ ಜರಿ ಕ್ವಟ್ಟಿಗೆ ತುಂಬುವಷ್ಟ್ ಸಿಕ್ಕುದಿಲ್ಲ ಅಂದೆಳಿ line startingಅಲ್ಲ್ ಯಾರ್ ಇದ್ರ್ ಅಂದೆಳಿ ಕಾಂಬುಕ್ ಶುರು ಮಾಡ್ತ್. ಚಂದ್ರ್ ಮಾಷ್ಟ್ರ್ ಲೈನ್ ಬಿಟ್ಟ್ ಹ್ವಾರೆ ಹೊಡಿತ್ರ್, ಆದದ್ದ್ ಆಯಿಲಿ ಮಾಲಿಂಗೇಶ್ವರ ಇದ್ದ ಅಂದೇಳಿ ಎರಡನೇ ಲೈನೆಗ್ ನಿತ್ಕಂಡಿ. ಪ್ರವೀಣ ಅಮಿತ ಆಚಿ ಲೈನೆಗ್ ನಿತ್ಕಂಡ್ರ್. “ಪ್ರತಿ ವರ್ಷ ಜಗ್ನತ್ ಮಾಷ್ಟ್ರ್ ಈ ಲೈನೆಗೆ ಪಂಚಕಜ್ಜಾಯಿ ಕೊಡುದ್. ಈಚಿಗ್ ಬಾಪ್ಪುದಾರ್ ಬಾ..” ದೊಡ್ಡ್ ಸಂಬೋಯಿತನ ಕಂಡೆಗ್ ಹೆಳ್ದ ಪ್ರವೀಣ. ನಂಗೂ ಹೌದ್ ಅಂಬಗ್ ಆಯ್ತ್. “ಹ್ವಾ ಸುಶಾಂತ, ಆಚಿಗ್ ಹ್ವಾಪೂವನಾ ” ನಾಲ್ಗೆಗ್ ನೀರ್ ತುಂಬ್ಕಂಡ್ ಕೇಂಡಿ. “ಮಾಷ್ಟ್ರ್ ಇಲ್ಲೇ ಇದ್ರ್ ಮರೆ. ಸುಮ್ನಯ್ಕೊ”ಅಂದ. ಅಷ್ಟೊತ್ತಿಗಾಗ್ಲೆ ನಮ್ಮ ಹರ್ಷ ದೇವಸ್ಥಾನದ ಬಾಗ್ಲ್ ಹತ್ರ ಬಂದಿದ. ಅವ್ನಿಗ್ ಯಾರ್ ಯಾವ್ ಲೈನೆಗೆ ಹೊದಳ್ ಕೊಡ್ತ್ರ್ ಅಂದೇಳಿ ತೊರ್ತಿತ್ತ್. ಅವ ಪಟ್ಟ ಕಂಡ್ ಜಗ್ನಾತ್ ಮಾಷ್ಟ್ರ್ ಅಂದ. “ನಾವು ಕುಶಿಯಿಂದ ಅಲ್ಲೇ ಒಂದ್ round ಡಾನ್ಸ್ ಮಾಡ್ತ್”. ಅಂತೂ ಇಂತು ನಮ್ಮ ಸರದಿ ಬಂತು. ಅರ್ದ ಜರಿ ಕ್ವಟ್ಟಿ ತುಂಬಾ ಹೊದಳ್ ತುಂಬ್ಸ್ಕಂಡ್ ಮನಿ ಬದಿಗ್ ಹ್ವಾಪು ಶುರು ಮಾಡ್ತ್. ದಾರೆಗ್ ಯಾರಾದ್ರೂ ಪ್ರಸಾದ ಕೆಂತ್ರ್ ಅಂದೆಳಿ ಓಡುಕ್ ಶುರು ಮಾಡ್ದನ್ ಮನಿ ಕಣ್ಣದೆಗೆ ನಿಂತದ್ದ್.

ಅವತ್ತಿನ ಆ ದಿನಗಳನ್ನ ನೆನ್ಸ್ಕಂಡ್ರೆ ಇವತ್ತಿಗೂ ಮೈ ಜುಮ್ಮ್ ಅಂತತ್ತ್. ಮತ್ತೆ ಶಾಲಿ ಚೀಲ ಹೊಗ್ಲ್ ಹಯ್ಕಂಡ್ ಶಾಲೀಗ್ ಓಡುವ ಅನ್ಸುತ್ತ್. ಎನಂತ್ರಿ??

 (ಚಿತ್ರ ಕೃಪೆ: ಅಂತರ್ಜಾಲ, gulfkannadiga.com)

ಗುರುವಾರ, ಮೇ 22, 2014

The ಮುಚ್ಕೊಳ್ಳೊ culture

(ವಿ.ಸೂ. : ಬೆಂಗಳೂರಿನ ಯುವಕರ ಹಿತದೃಷ್ಟಿಯಿಂದ ಬೆಂಗಳೂರಿಗರಿಗೊಂದು ವಿನಂತಿ.)

          “ ಪ್ರತಿಭಾ ಪಲಾಯನ ಈಗೊಂದು 4-5 ವರ್ಷಗಳಿಂದ ಬೆಂಗಳೂರು ಅನ್ನೊ ಮಹಾನಗರದಲ್ಲಿ ಅಸಂಖ್ಯಾತವಾಗಿದೆ. ರಾಜ್ಯದ ಪ್ರತಿಭೆಗಳು  ಇತರೆಡೆಗೆ ಚದುರಿಹೋಗುತ್ತಿದ್ದಾರೆ. ಅದರಲ್ಲೂ ಯುವಕರು ಬೆಂಗ್ಳೂರಿನ ಸಹವಾಸಾನೆ ಬ್ಯಾಡಪ್ಪ.. ಅನ್ನೋವಷ್ಟು ರೋಸಿ ಹೋಗಿದ್ದಾರೆ. ಯಾಕೆ ಹೀಗೆ .ಬೆಂಗಳೂರಲ್ಲಿ  ಆಗುತ್ತಿರುವ ಅಂತಹ ಬದಲಾವಣೆಗಳಾದರೂ ಏನು ? ಸ್ವಲ್ಪ ಕುಂತಲ್ಲೆ rewind ಮಾಡಿ, 5-6 ವರ್ಷ ಹಿಂದೆ ಸರಿಯಿರಿ. ಆಗ Fly oversಗಳು ಕಡಿಮೆ ಇದ್ದವು. ಮೆಟ್ರೊ ಕಾಮಗಾರಿ ಇರ್ಲಿಲ್ಲ. Traffic ಇಷ್ಟೊಂದು ದುಸ್ತರವಾಗಿರಲಿಲ್ಲ. ಮೋಟಾರು ದಟ್ಟಣೆ ಇರಲಿಲ್ಲ. Cost of leaving ಗೆ art of leaving ಕಲಿಯಲೇ ಬೇಕಾಗಿರಲಿಲ್ಲ. ಹಾಗಾಗಿ ಜೀವನವೂ ಸಸೂತ್ರವಾಗಿ ನಡಿತಿತ್ತು.  ಆದ್ರೆ ಈಗ, ಒಂದು ಖಾಯಿಲೆಗೆ ಔಷದಿ ತಗೊಳ್ಳೋಕೆ ಹೊರಗಡೆ ಹೋದ್ರೆ ಮತ್ತೆ ಮೂರು ಖಾಯಿಲೆ ಅಂಟಿಕೊಂಡಿರುತ್ತೆ. ಈ ತಾಪತ್ರೆ ಬೇಡ ಅಂದ್ಕೊಂಡು ಮನೆಯೊಳಗಡೆ ಇದ್ರೂ ಕಿಟಕಿ ತೆರೆಯೊ ಹಾಗಿಲ್ಲ. ಗಾಳಿ ಬರುತ್ತೋ ಇಲ್ಲವೋ ವಾಸನೆಧೂಳು ಮಾತ್ರ ಉಚಿತ. ಹೊರಗಡೆ ಹೋಗ್ಬೇಕು ಅಂದ್ರೆ ನವ-ರಂದ್ರಗಳಿಗೂ ತೇಪೆ ಹಾಕಿಕೊಳ್ಳಬೇಕು. ಹೀಗಿರೋವಾಗ ಯಾರಾದ್ರೂ ಇಲ್ಲಿ ಇರೋಕೆ ಇಷ್ಟ ಪಡ್ತಾರೆಯೇ??. ಇಷ್ಟೇ ಆಗಿದ್ದಿದ್ರೆ ನಮ್ಮ ಹುಡುಗ್ರು ಇಲ್ಲೇ ಇರ್ತಿದ್ರೆನೋಆದರೆ ನಗರಿಕರಣದ ಇನ್ನೊಂದು ದೊಡ್ಡ ಅಡ್ಡಪರಿಣಾಮದಿಂದಾಗಿ ನಮ್ಮ ಹುಡುಗ್ರು ಬೆಂಗಳೂರಿನ ಮೇಲಿರೊ ಭರವಸೆ, ಅಭಿಮಾನವನ್ನೆ ಕಳೆದುಕೊಂಡಿದ್ದಾರೆ. ಇಷ್ಟಕ್ಕೆಲ್ಲ ಕಾರಣ the ಮುಚ್ಕೊಳ್ಳೊ culture.

          ಆವಾಗೆಲ್ಲ ಹುಡುಗ್ರಿಗೆ mood ಹಾಳಾದ್ರೆ, mind fresh ಮಾಡ್ಕೊಳ್ಳೋಣ ಅಂತ ಅನ್ಸಿದ್ರೆ ಯೋಗಾಸನನೊ, ಪ್ರಾಣಾಯಾಮನೊ ಮಾಡ್ಬೇಕು ಅಂತೆನಿರ್ಲಿಲ್ಲ. ಹಾಗೆ ಒಂದು walk ಹೋದ್ರೆ ಸಾಕು. ಬಣ್ಣ-ಬಣ್ಣ ದ ಚಿಟ್ಟೆಗಳು ಹಾಗೆ ಕಣ್ಣಿಗೆ, ಮೂಗಿಗೆ ತಂಪಾದ ಗಾಳಿ ಹಾಕಿ, ತಣ್ಣಗಿಡುತ್ತಿತ್ತು. ಬಿರು-ಬಿಸಿಲಿನಲ್ಲೂ air-condition ನಲ್ಲಿ ಇದ್ದ ಹಾಗೆ ಇರ್ತಿತ್ತು. ಆದೆಷ್ಟೋ ಹುಡುಗರು ಈ ಬಣ್ಣ-ಬಣ್ಣ ಬಣ್ಣದ ಚಿಟ್ಟೆ ಗಳನ್ನ ನೋಡೊದಕ್ಕೆ ಅಂತಾನೆ ಬೆಂಗಳೂರಿಗೆ ಬರ್ತಿದ್ರು. ಹುಡುಗಿಯರೂ ಅಷ್ಟೇ, ತಾವು ಯಾರಿಗೂ ಕಮ್ಮಿ ಇಲ್ಲ ಅನ್ನೋ ರೀತಿ ತಮ್ಮ ಹಾವ,ಭಾವ, ಬಿಂಕ ಬಿಗುಮಾನಗಳಿಂದ, ಕಣ್ಸನ್ನೆಯಿಂದ, ಮಧು ತುಂಬಿದ ಮುಗುಳ್ನಗುವಿನಿಂದ ಹುಡುಗರ ಹೃದಯಕ್ಕೆ  ಕಣ್ಣು ಹೊಡಿತಿದ್ದರು, ಕನ್ನ ಹಾಕುತ್ತಿದ್ದರು. ಆದರೆ ಇಂದಿನ ಅಭಿವೃದ್ದಿಯ ಪತಕ್ಕೆ ಯುವಕರು ಬಲಿಯಾಗಿದ್ದಾರೆ. ಸಾವಿರಾರು ಆಸೆ ಹೊತ್ತು ಬೆಂಗಳೂರಿಗೆ ಬರುವ ಯುವಕರಿಗೆ ಮೋಸ ನಡೆಯುತ್ತಿದೆ. ಬೆಳವಣಿಗೆಯ ಸೋಗಿಗೆ, ಬೆಂಗಳೂರು ತೊಟ್ಟಿ ಗುಂಡಿಯಾಗಿದೆ. ಮುಖ ಮೂತಿ ಮುಚ್ಚಿಕೊಂಡೆ ಬೀದಿಗೆ ಇಳಿಯ ಬೇಕಾದ ಅನಿವಾರ್ಯತೆ ಎಲ್ಲರಿಗೂ ಇದೆ. ಕೇಶ ರಾಶಿಯನ್ನು ಅಲಂಕರಿಸಿ, ಮೋರೆಗಿಷ್ಟು ಬಣ್ಣ ಬಳಿದು, ಸೊಂಟ ಬಳುಕಿಸುತ್ತ ಹೋಗೊ ಹುಡಿಗಿಯರು ಇಂದು ಒಂದಿಂಚು ಮಾಂಸ ಕಾಣದಂತೆ air-tight pack ಮಾಡ್ಕೊಂಡು ಬೀದಿಗೆ ಇಳಿತಿದ್ದಾರೆ. ಹೀಗೆ ಅಡಿಯಿಂದ ಮುಡಿವರೆಗೂ ಬಿದಿರು ಬೊಂಬೆ ಹಾಗೆ ಬಟ್ಟೆ ಮುಚ್ಕೊಂಡು ರಸ್ತೆಗೆ ಇಳಿದರೆ ಪ್ರೀತಿ-ಪ್ರೇಮ ಅನ್ನೊ ಶಬ್ದಗಳು ಉಳಿಯುವುದಾದ್ರು ಹೇಗೆ?. ಪ್ರೀತಿ-ಪ್ರೇಮ ಹಾಳಾಗಿ ಹೋಗಲಿ ಸೌಂದರ್ಯೋಪಾಸನೆ- ಸೌಂದರ್ಯೋಸ್ವಾದನೆ ನಶಿಸಿಹೋಗ್ತಿದೆ.


          ಹೀಗೆ ಆದ್ರೆ ಯುವ ಜನಾಂಗದ ಅಧ-ಪತನ ನಿಶ್ಚಿತ. ಹುಡುಗಿ ಅಂದರೆ ಏನು. ಅವರ ಮುಖ ಹೇಗೆ ಇರುತ್ತೆ, make up ಯಾಕೆ ಮಾಡ್ಕೊತಾರೆ,first sight ಅಂದ್ರೆ ಹೇಗಿರುತ್ತೆ..  ಎಂಬಿತ್ಯಾದಿ ಅಂಶಗಳನ್ನು ಪುಸ್ತಕ ಓದಿಯೊ, TV ನೋಡಿಯೊ ತಿಳಿದುಕೊಳ್ಳ ಬೇಕಾಗುತ್ತದೆ. ಸೌಂದರ್ಯ ವರ್ದಕಗಳ ತಯಾರಕರು ಡಾಂಬಾರು-ಕಬ್ಬಿಣ ಸುಣ್ಣ ತಯಾರಿಸ ಬೇಕಾಗುತ್ತೆ.  ಆದ್ದರಿಂದ ಈ ಗಂಭೀರ ವಿಷಯದ ಬಗ್ಗೆ ಯುವ ಜನಾಂಗ ಎಚ್ಚೆತ್ತುಕೊಳ್ಳಬೇಕಾಗಿದೆ. ಪರಿಸರ ಮಾಲಿನ್ಯದ ಬಗ್ಗೆ ಜನರಿಗೆ ತಿಳಿಸಿ ಹೇಳಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ. ಆವಗ್ಲಾದ್ರೂ ಮತ್ತೆ black and white ದುನಿಯಾ colorful ಆಗ್ಬಹುದೆನೋ. ನೀವೇನಂತೀರಾ??. 

ಪರಿಕಲ್ಪನೆ-ರಚನೆ
ದಿಲೀಪ ಕುಮಾರ ಶೆಟ್ಟಿ.

ಚಿತ್ರ ಕೃಪೆ: ಅಂತರ್ಜಾಲ