ಕನ್ನಡ ಕಲಿಯಿರಿ. ನಿಮ್ಮ ಅನಿಸಿಕೆಯನ್ನು ಕನ್ನಡದಲ್ಲಿ ನೀಡಿರಿ.


Type in English. Press Space to get it in ಕನ್ನಡ ಲಿಪಿ Press Ctrl+g to toggle between English and Kannada

ಶನಿವಾರ, ಆಗಸ್ಟ್ 13, 2011

ಸ್ವಾತಂತ್ರ್ಯ





       ಸ್ವಾತಂತ್ರ್ಯ..

ನೆತ್ತರು ಹರಿಯಿತು, ಮೌನವೂ ಮುರಿಯಿತು
ಅನೀತಿ ಅಳಿಯಿತು,  ಅನ್ಯಾಯವ ಹೊಡೆಯಿತು
ಬರಿ  ಮಣ್ಣಿಗಲ್ಲ , ಹಿಡಿ ಹೊನ್ನಿಗಲ್ಲ
ಗಡಿ ಗಡಿಗೆ ನಡೆಯುವ ಅವಮಾನದ ಕಿಡಿ
ಗುಡು ಗುಡುಗಿ ಗುಡಿಸಿತು ಬಿಡುಗಡೆಯ ಗಾಡಿ.

ದಣಿವ ಯೋಚನೆ ಇಲ್ಲ, ಸಾವಿಗದು ಸಾಯೊಲ್ಲ,
ಸ್ವಾತಂತ್ರ್ಯದ ಕಿಡಿ  ಸಧಬಿಮಾನದ ನುಡಿ
ಕಿಚ್ಚ ಹಚ್ಚಿತು, ಕೊಚ್ಚಿ ಕೊoದಿತು
ಪರಕೀಯರ ಪತನಕೆ ಪಟ್ಟು ಹಿಡಿಯಿತು.

ಕಟ್ಟಿ ಕೊಟ್ಟರು ಸ್ವೇಚ್ಛೆಯ ನೆಲೆ
ಸ್ವಚ್ಛoದದಿ ಹಾರು ಗುರಿ ಕರೆಯುವ ಕಡೆಗೆ
ದೇಶ ನಿನ್ನದು, ಭಾಷೆ ನಿನ್ನದು
ಧೀರರ ಋಣ, ಕರ್ತವ್ಯದ ಪಣ
ಕಡೆವರೆಗೂ ಇರಲಿ, ಕರುನಾಡ ಬೆಳಗಲಿ


ಭರತ ಮಾತೆ ನಿನ್ನ ಪೂಜಿಪೆ,
ನಿನ್ನ ಬಂಧನ ಬಿಡಿಪ ಯೋಧರ ನಿತ್ಯ ಪೂಜಿಪೆ.

-ದಿಲೀಪ್ ಶೆಟ್ಟಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ